WTC Final: ಇಶಾನ್ ಕಿಶನ್ಗೂ ಅನ್ಯಾಯ.. ಇದಕ್ಕೆಲ್ಲ ಧೋನಿಯೇ ಹೊಣೆ ಎಂದ ಅಭಿಮಾನಿಗಳು
ಪ್ರತಿಷ್ಠಿತ WTC ಫೈನಲ್ನಲ್ಲಿ ಇಶಾನ್ ಕಿಶನ್ಗೆ ಸ್ಥಾನ ನೀಡ್ದೇ ಟೀಮ್ ಮ್ಯಾನೇಜ್ಮೆಂಟ್ ಯಡವಟ್ಟು ಮಾಡ್ಕೊಳ್ತಾ? ಇಲ್ಲ ಮಹೇಂದ್ರ ಸಿಂಗ್ ಧೋನಿಯೇ ಜಾರ್ಖಂಡ್ ಪ್ರತಿಭೆಗೆ ವಿಲನ್ ಆಗಿಬಿಟ್ರಾ? ಇಂಥದ್ದೊಂದು ಚರ್ಚೆ ಕ್ರಿಕೆಟ್ ಪಡೆಸಾಲೆಯಲ್ಲಿ ಕೇಳಿ ಬರ್ತಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆರಂಭಕ್ಕೂ ಮುನ್ನ ಕ್ರಿಕೆಟ್ ಲೋಕದಲ್ಲಿ ಚರ್ಚೆಯಾಗಿದ್ದೇ, ಟೀಮ್ ಇಂಡಿಯಾ ಪರ ವಿಕೆಟ್ ಕೀಪರ್ ಆಗೋದ್ಯಾರು? ಈ ಪ್ರಶ್ನೆಗೆ ಬಹುತೇಕರ ಉತ್ತರ ಒಂದೇ ಆಗಿತ್ತು.. ಅದೇ ಜಾರ್ಖಂಡ್ ಹೀರೋ ಇಶಾನ್ ಕಿಶನ್. ಟಾಸ್ ಬೆನ್ನಲ್ಲೇ ಬಹುತೇಕರ […] The post WTC Final: ಇಶಾನ್ ಕಿಶನ್ಗೂ ಅನ್ಯಾಯ.. ಇದಕ್ಕೆಲ್ಲ ಧೋನಿಯೇ ಹೊಣೆ ಎಂದ ಅಭಿಮಾನಿಗಳು appeared first on News First Kannada.


ಪ್ರತಿಷ್ಠಿತ WTC ಫೈನಲ್ನಲ್ಲಿ ಇಶಾನ್ ಕಿಶನ್ಗೆ ಸ್ಥಾನ ನೀಡ್ದೇ ಟೀಮ್ ಮ್ಯಾನೇಜ್ಮೆಂಟ್ ಯಡವಟ್ಟು ಮಾಡ್ಕೊಳ್ತಾ? ಇಲ್ಲ ಮಹೇಂದ್ರ ಸಿಂಗ್ ಧೋನಿಯೇ ಜಾರ್ಖಂಡ್ ಪ್ರತಿಭೆಗೆ ವಿಲನ್ ಆಗಿಬಿಟ್ರಾ? ಇಂಥದ್ದೊಂದು ಚರ್ಚೆ ಕ್ರಿಕೆಟ್ ಪಡೆಸಾಲೆಯಲ್ಲಿ ಕೇಳಿ ಬರ್ತಿದೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆರಂಭಕ್ಕೂ ಮುನ್ನ ಕ್ರಿಕೆಟ್ ಲೋಕದಲ್ಲಿ ಚರ್ಚೆಯಾಗಿದ್ದೇ, ಟೀಮ್ ಇಂಡಿಯಾ ಪರ ವಿಕೆಟ್ ಕೀಪರ್ ಆಗೋದ್ಯಾರು? ಈ ಪ್ರಶ್ನೆಗೆ ಬಹುತೇಕರ ಉತ್ತರ ಒಂದೇ ಆಗಿತ್ತು.. ಅದೇ ಜಾರ್ಖಂಡ್ ಹೀರೋ ಇಶಾನ್ ಕಿಶನ್.
ಟಾಸ್ ಬೆನ್ನಲ್ಲೇ ಬಹುತೇಕರ ನಿರೀಕ್ಷೆ ಹುಸಿಯಾಗಿತ್ತು. ಇದಕ್ಕೆ ಕಾರಣ ವಿಕೆಟ್ ಕೀಪರ್ ಆಗಿ ಕೆ.ಎಸ್.ಭರತ್ ಗ್ಲೌಸ್ ತೊಟ್ಟಿದ್ದೇ ಆಗಿತ್ತು. ಆದ್ರೆ ಫೈನಲ್ಸ್ನಲ್ಲಿ ಎಫೆಕ್ಟೀವ್ ಇಶಾನ್ ಬದಲಿಗೆ, ಕೆ.ಎಸ್.ಭರತ್ ಗ್ಲೌಸ್ ತೊಟ್ಟಿದರ ಹಿಂದೆ ಸಿಕ್ರೇಟ್ ಇದೆ. ಅದೇ ಮಹೇಂದ್ರ ಸಿಂಗ್ ಧೋನಿ.
ಇಶಾನ್ ಪಾಲಿಗೆ ವಿಲನ್ ಆದ್ರಾ ಎಮ್.ಎಸ್.ಧೋನಿ?
ಇಂಥದ್ದೊಂದು ಕಾರಣ ಐಪಿಎಲ್ನಲ್ಲಿ ನಡೆದ ಒಂದೇ ಒಂದು ಘಟನೆ. ಸಹಜವಾಗೇ ಐಪಿಎಲ್ ವೇಳೆ ಯುವ ಆಟಗಾರರ ಪಾಲಿಗೆ ಮೆಂಟರ್ ಆಗ್ತಿದ್ದ M.S.ಧೋನಿ, ಕೆ.ಎಸ್.ಭರತ್ಗೂ ವಿಕೆಟ್ ಕೀಪಿಂಗ್ ಸ್ಕಿಲ್ಸ್ ಪಾಠ ಮಾಡಿದ್ದರು. ಇಂಗ್ಲೆಂಡ್ ಟಫ್ ಕಂಡೀಷನ್ಸ್ನಲ್ಲಿ ಹೇಗೆಲ್ಲಾ ವರ್ತಿಸುತ್ತೆ ಅನ್ನೋದರ ಬಗ್ಗೆ ಮಹತ್ವದ ಟಿಪ್ಸ್ ನೀಡಿದ್ದರು. ಇದೇ ಈಗ ಇಶಾನ್ ಕಿಶನ್ ಪಾಲಿಗೆ ವಿಲನ್ ಆಯ್ತ ಎಂಬ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಇದಕ್ಕೆಲ್ಲಾ ಕಾರಣ ಜಾರ್ಖಂಡ್ ಮೂಲದ ಆಟಗಾರನಿಗೇ ಬಿಟ್ಟು, ದೂರದ ಹೊರ ರಾಜ್ಯದ ಆಟಗಾರನಿಗೆ ಅಗತ್ಯ ಟಿಪ್ಸ್ ನೀಡಿದ್ದೇ ಆಗಿದೆ.
IPL ವೇಳೆಯೇ ಫಿಕ್ಸ್ ಆಗಿತ್ತಾ ವಿಕೆಟ್ ಕೀಪರ್ ಸ್ಥಾನ?
ಇಶಾನ್ಗೆ ಧೋನಿ ವಿಲನ್ ಆಗಿದ್ದಾರೆ ಅನ್ನೋದು ಒಂದೇ ಮಾತ್ರವಲ್ಲ. ಧೋನಿ ಸಲಹೆ ಮೇರೆಗೆಯೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಗ್ಲೌಸ್ ತೊಡೆಲು ಕಾರಣ ಅಂತಾನೂ ಹೇಳಲಾಗ್ತಿದೆ. ಐಪಿಎಲ್ ವೇಳೆ ಕ್ಯಾಪ್ಟನ್ ರೋಹಿತ್ ಶರ್ಮಾಗೆ, ಸ್ವತಃ ಧೋನಿಯೇ ವಿಕೆಟ್ ಕೀಪರ್ ಆಗಿ ಕೆ.ಎಸ್.ಭರತ್ ಹೆಸರು ಶಿಫಾರಸು ಮಾಡಲಾಗಿದೆ ಎನ್ನಲಾಗ್ತಿದೆ.
ಅಗ್ರೆಸ್ಸಿವ್ ಇಶಾನ್ ಬದಲಿಗೆ ಡಿಫೆನ್ಸಿವ್ ಭರತ್ಗೆ ಸ್ಥಾನ
ಪಂತ್ ಅಲಭ್ಯತೆಯಲ್ಲಿ ಟೀಮ್ ಇಂಡಿಯಾಗೆ ಅಗ್ರೆಸ್ಸಿವ್ ಬ್ಯಾಟರ್ನ ಅಗತ್ಯತೆ ಇತ್ತು. ಇನ್ಫ್ಯಾಕ್ಟ್ ಪಂತ್ ಪ್ಲೇವರ್ ಪರ್ಫೆಕ್ಟ್ ಚಾಯ್ಸ್ ಕೂಡ ಇಶಾನ್ ಕಿಶನ್ ಆಗಿದ್ದರು. ಕೌಂಟರ್ ಅಟ್ಯಾಕರ್ ಅಸ್ತ್ರವಾಗಿ ಇಶಾನ್ ಬಳಿಸಿ ಎದುರಾಳಿಗೆ ಟಕ್ಕರ್ ನೀಡಬಹುದಿತ್ತು. ಆದ್ರೆ, ಇದರ ಬದಲಿಗೆ ಡಿಫೆನ್ಸೀವ್ ಆಟವಾಡೋ ಕೆ.ಎಸ್.ಭರತ್ಗೆ ಚಾನ್ಸ್ ನೀಡಿದ್ದು ನಿಜಕ್ಕೂ ಸರಿಯಾ ಎಂಬ ಪ್ರಶ್ನೆ ಮೂಡ್ತಿದೆ. ಫಸ್ಟ್ ಕ್ಲಾಸ್ ಕ್ರಿಕೆಟ್ನ ಅಂಕಿ-ಅಂಶಗಳಿಂದ ಯಾರು ಬೇಕಿತ್ತು ಎಂಬ ಪ್ರಶ್ನೆಯನ್ನ ಅಭಿಮಾನಿಗಳು ಕೇಳ್ತಿದ್ದಾರೆ.
ಫಸ್ಟ್ ಕ್ಲಾಸ್ನಲ್ಲಿ ಉಭಯ ಆಟಗಾರರು
ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ 90 ಇನ್ನಿಂಗ್ಸ್ಗಳಿಂದ 4808 ರನ್ ಕಲೆ ಹಾಕಿರೋ ಕೆ.ಎಸ್.ಭರತ್, 27 ಅರ್ಧಶತಕ, 9 ಶತಕಗಳನ್ನ ಸಿಡಿಸಿದ್ದಾರೆ. 59.79ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. 82 ಇನ್ನಿಂಗ್ಸ್ಗಳಿಂದ ಇಶಾನ್ ಕಿಶನ್, 2985 ರನ್ ಕಲೆಹಾಕಿದ್ರೆ, ಈ ಪೈಕಿ 16 ಅರ್ಧಶತಕ, 6 ಶತಕ ಸಿಡಿಸಿದ್ದಾರೆ. 68.90ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಇಂತಹ ಅಟ್ಯಾಕಿಂಗ್ ಬ್ಯಾಟಿಂಗ್ ಆಡೋ ಇಶಾನ್, ನಿಜಕ್ಕೂ ಪಂತ್ ಸ್ಥಾನಕ್ಕೆ ಪರ್ಫೆಕ್ಟ್ ಚಾಯ್ಸ್ ಆಗಿದ್ದರು ಅನ್ನೋದರಲ್ಲಿ ಎರಡು ಮಾತಿಲ್ಲ.
ಟೆಕ್ನಿಕಲಿ ಸ್ಟ್ರಾಂಗ್ ಇರೋ ಭರತ್ಗೆ ಮಣೆಹಾಕ್ತಾ ಮ್ಯಾನೇಜ್ಮೆಂಟ್?
ಟೀಮ್ ಮ್ಯಾನೇಜ್ಮೆಂಟ್ ಕೆ.ಎಸ್.ಭರತ್ಗೆ ಮಣೆಹಾಕಲು ಇರೋ ಕಾರಣ. ಇಶಾನ್ ಕಿಶನ್ರ ಎಕ್ಸ್ಪ್ಲೋರಿವ್ ಬ್ಯಾಟಿಂಗ್ಗಿಂತ ಕೆ.ಎಸ್.ಭರತ್ರ ಬ್ಯಾಟಿಂಗ್ ಟೆಕ್ನಿಕಲಿ ಟಾಪ್. ಇದಿಷ್ಟೇ ಅಲ್ಲ, ಕಳೆದ 2 ವರ್ಷಗಳಿಂದ ಟೀಮ್ ಇಂಡಿಯಾ ಜೊತೆ ಪ್ರಯಾಣ ಮಾಡಿರೊ ಕೆ.ಎಸ್.ಭರತ್, ಇಂಗ್ಲೆಂಡ್ ಕಂಡೀಷನ್ಸ್ ಬಗ್ಗೆನೂ ಚೆನ್ನಾಗಿ ಅರಿತಿದ್ದಾರೆ.
ವೈಟ್ಬಾಲ್ಗೆ ಕ್ರಿಕೆಟ್ಗೆ ಹೋಲಿಸಿದ್ರೆ ಟೆಸ್ಟ್ ಕ್ರಿಕೆಟ್ ಡಿಫರೆಂಟ್ ಗೇಮ್. ಇಲ್ಲಿ ಅಗ್ರೆಸ್ಸೀವ್ ಅಸ್ತ್ರಕ್ಕಿಂತ ತಾಳ್ಮೆಯೂ ಮುಖ್ಯ. ಅಷ್ಟೇ ಅಲ್ಲ, ರೆಡ್ಬಾಲ್ ಕ್ರಿಕೆಟ್ನಲ್ಲಿ ವಿಕೆಟ್ ಕೀಪಿಂಗ್ ಮಾಡೋದು ಬಿಗ್ ಚಾಲೆಂಜ್. ಈಗಾಗಲೇ ಇಂತಹ ಚಾಲೆಂಜಿಂಗ್ ಕಂಡೀಷನ್ಸ್ನಲ್ಲಿ ಭರತ್, ತಮ್ಮ ವಿಕೆಟ್ ಕೀಪಿಂಗ್ ಸ್ಕಿಲ್ಸ್ನ ಕೂಡ ಹೊರಹಾಕಿದ್ದಾರೆ. ಇದೇ ಕಾರಣಕ್ಕೆ ಟೀಮ್ ಮ್ಯಾನೇಜ್ಮೆಂಟ್ ಭರತ್ಗೆ ಪ್ರತಿಷ್ಠಿತ ಪಂದ್ಯದಲ್ಲಿ ಚಾನ್ಸ್ ನೀಡೋಕೆ ಮೇನ್ ರೀಸನ್.
ಒಟ್ಟಿನಲ್ಲಿ ಅದೇನೇ ಆಗಲಿ, ಮ್ಯಾನೇಜ್ಮೆಂಟ್ ನಂಬಿಕೆಗೆ ತಕ್ಕಂತೆಯೇ ಈಗ ವಿಕೆಟ್ ಹಿಂದೆ ಭರತ್, ಬೊಂಬಾಟ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಇದನ್ನೇ ವಿಕೆಟ್ ಮುಂದೆಯೂ ನೀಡಿ ಐಸಿಸಿ ಟ್ರೋಫಿ ಗೆಲ್ಲಿಸಿಕೊಡಲಿ ಅನ್ನೋದೇ ಭಾರತೀಯ ಕ್ರಿಕೆಟ್ ಪ್ರೇಮಿಗಳ ಆಶಯ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
The post WTC Final: ಇಶಾನ್ ಕಿಶನ್ಗೂ ಅನ್ಯಾಯ.. ಇದಕ್ಕೆಲ್ಲ ಧೋನಿಯೇ ಹೊಣೆ ಎಂದ ಅಭಿಮಾನಿಗಳು appeared first on News First Kannada.